ಸ್ಟ್ಯಾನಿ ಪಿಂಟೋ ರವರು ಸತ್ಯದ ಮತ್ತು ನ್ಯಾಯ ಪರ್ವದ ಹೋರಾಟಗಳನ್ನು ಮಾಡಿಕೊಂಡು ಬಂದಿರುತ್ತಾರೆ, ಕನ್ನಡಪರ ದಲಿತಪರ ಕಾರ್ಮಿಕ ಪರ ರೈತಪರ ಸಾಕಷ್ಟು ಹೋರಾಟಗಳದ್ದು ಸುಮಾರು 10 ವರ್ಷಗಳಿಂದ ಮಾಡಿಕೊಂಡು ಬಂದಿರುತ್ತಾರೆ, ಇಂದಿನ ದಿನಮಾನಗಳಲ್ಲಿ ನ್ಯಾಯಯುತ ಪತ್ರಿಕೋದ್ಯಮ ಅವಶ್ಯಕತೆ ಇದೆ, ಪತ್ರಿಕೋದ್ಯಮ ವ್ಯಾಪಾರವಲ್ಲ ಅದೊಂದು ಸೇವೆ ಅದು ನ್ಯಾಯಯುತವಾಗಿ ನಡೆಯಬೇಕು, ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರಬಾರದು ಮುಖ್ಯವಾಗಿ ನೊಂದವರ ಅಸಹಾಯಕರ ಧ್ವನಿ ಆಗಿರಬೇಕು ಈ ನಿಟ್ಟಿನಲ್ಲಿ ಸ್ಟ್ಯಾನಿ ಪಿಂಟೋ ಅವರ ಸಾರಥ್ಯದಲ್ಲಿ 2022 ರಲ್ಲಿ ಕೆಸಿಎಸ್ ಮೀಡಿಯಾ ಪ್ರಾರಂಭವಾಯಿತು, ಸುಮಾರು 10 ದೇಶಗಳಿಂದ ಕನ್ನಡಿಗರು ಈ ಚಾನೆಲ್ ವೀಕ್ಷಿಸುತ್ತಿದ್ದಾರೆ, ಮುಖ್ಯವಾಗಿ ಈ ಚಾನೆಲ್ ಫೇಸ್ ಬುಕ್ ಮತ್ತು ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು